ಭೀಮನು 10000 ಆನೆಗಳ ಬಲವನ್ನು ಹೇಗೆ ಪಡೆದುಕೊಂಡ?

Bhima fighting with nagas

 

ಭೀಮನು ತನ್ನ 10000 ಆನೆಗಳಿಗೆ ಸಮನಾದ ಶಕ್ತಿ ಹೊಂದಿರುವುದಕ್ಕೆ ಪ್ರಸಿದ್ಧಿಯಾಗಿದ್ದಾನೆ. ಅವನು ಇಂತಹ ಶಕ್ತಿಯನ್ನು ಹೇಗೆ ಪಡೆದ ಎಂಬುದನ್ನು ನೋಡೋಣ.

ದುರ್ಯೋಧನನು ಭೀಮನಿಗೆ ವಿಷವನ್ನು ಹಾಕುತ್ತಾನೆ

ಹುಡುಗರಾದ ಪಾಂಡವರು ಮತ್ತು ಕೌರವರು ಗಂಗಾನದಿಯ ದಡಕ್ಕೆ ವಾಯುವಿಹಾರಕ್ಕೆ ಹೋಗಿದ್ದರು. ಅಲ್ಲಿದ್ದ ಒಂದು ತುಂಬಾ ಸುಂದರವಾದ ಉದ್ಯಾನವನದಲ್ಲಿ ಅವರು ಆಟವಾಡುತ್ತಿದ್ದರು.
ದಾಯಾದಿಗಳಾದ ಅವರುಗಳು ತಾವು ಅರಮನೆಯಿಂದ ತಂದಿದ್ದ ಸವಿಯಾದ ತಿಂಡಿಗಳನ್ನು ಒಬ್ಬರಿಗೊಬ್ಬರು ತಿನ್ನಿಸುತ್ತಾ ಇದ್ದರು. ಆ ಸಮಯದಲ್ಲಿ ದುರ್ಯೋಧನನು ಭೀಮನಿಗೆ ಯಾವುದೋ ತಿಂಡಿಯಲ್ಲಿ ಕಾಲಕೂಟವೆಂಬ ಮಾರಕ ವಿಷವನ್ನು ಮಿಶ್ರಮಾಡಿ ಕೊಟ್ಟ. 

Click below to watch video - ಅಬ್ಬಬ್ಬಾ ಎಷ್ಟು ಪರಾಕ್ರಮಿ ಗೊತ್ತಾ ಭೀಮ!  

 

ಅಬ್ಬಬ್ಬಾ ಎಷ್ಟು ಪರಾಕ್ರಮಿ ಗೊತ್ತಾ ಭೀಮ! Bheema Full Story in Kannada|Mahabharatha Bhima |SR TV mythology 

 

ನಂತರ ಏನಾಯಿತು?

ನಂತರ ಅವರೆಲ್ಲರೂ ನೀರಿನಲ್ಲಿ ಆಟವಾಡಿದರು.
ಸಂಜೆಯ ವೇಳೆಗೆ ಎಲ್ಲರಿಗೂ ದಣಿವಾಗಿತ್ತು. ಅವರೆಲ್ಲರೂ ರಾತ್ರಿಯನ್ನು ಅಲ್ಲಿಯೇ ಕಳೆಯಬೇಕೆಂದು ನಿರ್ಧರಿಸಿದರು.
ಅವರೆಲ್ಲರೂ ಮಲಗಲು ಸಿದ್ದರಾದಾಗ, ದುರ್ಯೋಧನನಿಗೆ ಭೀಮನು ವಿಷದ ಪ್ರಭಾವಕ್ಕೆ ಒಳಗಾಗಿರುವುದು ಅರಿವಾಯಿತು.
ಅವನು ಭೀಮನನ್ನು ಬಳ್ಳಿಗಳಿಂದ ಕಟ್ಟಿಹಾಕಿ ಅವನನ್ನು ಗಂಗೆಯಲ್ಲಿ ತಳ್ಳಿದ.

ಭೀಮನು 10000 ಆನೆಗಳ ಬಲವನ್ನು ಹೇಗೆ ಪಡೆದುಕೊಂಡ?

ಗಂಗಾ ನದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮುಳುಗಿದ ಮೇಲೆ ಭೀಮನು ನಾಗಲೋಕವನ್ನು ತಲುಪಿದ. ಹಲವಾರು ನಾಗಗಳು ಅವನೊಬ್ಬ ಶತ್ರುವೆಂದು ಭಾವಿಸಿ ಕಚ್ಚಿದವು. ನಾಗಗಳ ವಿಷವು ದುರ್ಯೋಧನ ಕೊಟ್ಟ ವಿಷಕ್ಕೆ ವಿಷ-ವಿರೋಧಿಯಾಗಿ ಕೆಲಸ ಮಾಡಿತು. ಭೀಮ ಮೇಲೆದ್ದ, ತನ್ನನ್ನು ತಾನು ಒಂದುಗೂಡಿಸಿಕೊಂಡು ನಾಗಗಳನ್ನು ಹಿಡಿದು ಅವರನ್ನು ನೆಲಕ್ಕೆ ಅಪ್ಪಳಿಸಲು ಪ್ರಾರಂಭಿಸಿದ.

ನಾಗಗಳ ದೊರೆಯಾದ ವಾಸುಕಿಯು ಇದರ ಬಗ್ಗೆ ತಿಳಿದ ಮತ್ತು ಕೆಳಗೆ ಬಂದ. ಆರ್ಯಕ ಎಂಬ ಒಬ್ಬ ಹಿರಿಯ ನಾಗನು ಭೀಮನು ತನ್ನ ಮೊಮ್ಮಗನ ಮೊಮ್ಮಗ ಎಂಬುದನ್ನು ಗುರುತಿಸಿದ.

ಆರ್ಯಕನ ಮಗಳ ಮಗ, ಶೂರಸೇನ. ಅವನು ಕುಂತಿಯ ತಂದೆ.

ವಾಸುಕಿಯು ಭೀಮನಿಗೆ ಬಹಳಷ್ಟು ಸ್ವರ್ಣ ಮತ್ತು ಅಮೂಲ್ಯ ರತ್ನಗಳನ್ನು ನೀಡಿದ. ಭೀಮನನ್ನು ನಾಗಲೋಕದಲ್ಲಿರುವ ಕುಂಡಗಳಲ್ಲಿನ ಔಷಧದ ಗುಟುಕನ್ನು ಕುಡಿಯಲು ಬಿಟ್ಟರೆ ಪ್ರತಿಯೊಂದು ಕುಂಡವೂ ಅದನ್ನು ಕುಡಿದವರಿಗೆ ಒಂದು ಸಾವಿರ ಆನೆಗಳ ಬಲವನ್ನು ಕೊಡುತ್ತದೆಂದು ಆರ್ಯಕನು ಸೂಚಿಸಿದ.

ಭೀಮನು ಎಲ್ಲಾ ಕುಂಡಗಳಿಂದ ಔಷಧದ ಗುಟುಕನ್ನು ಕುಡಿದ ಮತ್ತು ಅದನ್ನು ಜೀರ್ಣಿಸಿಕೊಳ್ಳಲು ಏಳು ದಿನಗಳ ಕಾಲ ಮಲಗಿ ಬಿಟ್ಟ.

ಅವನು ಎಂಟನೆಯ ದಿನ ಮೇಲೆ ಎದ್ದ.

ಭೀಮನಿಗೆ ಅವನು 10000 ಆನೆಗಳ ಬಲವನ್ನು ಹೊಂದಿರುವುದಾಗಿಯೂ ಮತ್ತು ಯಾರಿಗೂ ಅವನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ನಾಗಗಳು ಹೇಳಿದರು.

यत् ते पीतो महाबाहो रसोऽयं वीर्यसम्भृतः।
तस्मान्नागायुतबलो रणेऽधृष्यो भविष्यसि॥

ನಾಗಗಳು ಅವನನ್ನು ಮರಳಿ ಕರೆದುಕೊಂಡು ಬಂದು ಅದೇ ಉದ್ಯಾನವನದಲ್ಲಿ ಬಿಟ್ಟರು. ಅರಮನೆಗೆ ಹಿಂತಿರುಗಿದ ಮೇಲೆ, ಭೀಮ ಏನಾಯಿತೆಂದು ಎಲ್ಲರಿಗೂ ಹೇಳಿದ.

ದುರ್ಯೋಧನನು ಭೀಮನಿಗೆ ಮತ್ತೊಮ್ಮೆ ಕಾಲಕೂಟವನ್ನು ಆಹಾರದಲ್ಲಿ ಮಿಶ್ರ ಮಾಡಿ ವಿಷವನ್ನು ಹಾಕಲು ಪ್ರಯತ್ನಿಸಿದ. ಈ ಬಾರಿ, ದೃತರಾಷ್ಟ್ರನ ಮಗನಾದ ಯುಯುಟ್ಸು ಅವನಿಗೆ ಎಚ್ಚರಿಕೆ ಕೊಟ್ಟ. ಆದರೂ ಸಹ ಭೀಮ ಆ ವಿಷ ಸೇರಿಸಿದ ಆಹಾರವನ್ನು ಸೇವಿಸಿದ ಮತ್ತು ಅದನ್ನು ಜೀರ್ಣಿಸಿಕೊಂಡ.

ಅವನಿಗೆ ಏನೂ ಆಗಲಿಲ್ಲ.

(ಮಹಾಭಾರತ. ಆದಿಪರ್ವ 127 ಮತ್ತು 128)

86.4K

Comments

przpd

ಅನುವಾದ: ಡಿ.ಎಸ್.ನರೇಂದ್ರ

Kannada Topics

Kannada Topics

ಮಹಾಭಾರತ

Copyright © 2024 | Vedadhara | All Rights Reserved. | Designed & Developed by Claps and Whistles
| | | | |